ದೇವಣಗಾಂವ: ಜೀವನದಲ್ಲಿ ಸರಳತೆ ಅಳವಡಿಸಿಕೊಂಡು ಸಜ್ಜನರಾಗಿ ಬಾಳಲು ಪುರಾಣ, ಪುಣ್ಯಕಥೆಗಳು ಸಹಕಾರಿಯಾಗಿವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಗ್ರಾಮದ ಮಹಾಲಕ್ಷಿö್ಮ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ದೇವಿ ಪುರಾಣ ಮಂಗಲೊತ್ಸವದಲ್ಲಿ ಮಾತನಾಡುತ್ತಿದ್ದರು ಪುರಾಣಗಳು, ವೇದಗಳು, ಮಹಾಕಾವ್ಯಗಳು ನಮ್ಮ ದೇಶದ ಸಂಸ್ಕೃತಿಯನ್ನು ಹೆಚ್ಚಿಸಿವೆ. ಮನುಷ್ಯನಿಗೆ ಉತ್ತಮ ಸಂಸ್ಕಾರ, ಜೀವನದಲ್ಲಿ ಮಾನವೀಯ ಮೌಲ್ಯಗಳ ಗುಣಗಳನ್ನು ಹೆಚ್ಚಿಸುವಲ್ಲಿ ಇಂಥ ಧಾರ್ಮಿಕ ಆಚರಣೆಗಳ ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕು, ಯುವಕರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ತಿರಸ್ಕರಿಸಿ ನಮ್ಮದೇಶದ ಸಂಸ್ಕೃತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದರು.
ಪುರಾಣಿಕರಾದ ಶಿವಲಿಂಗಯ್ಯ ಶಾಸ್ತಿçಗಳು ಗರೂರ(ಬಿ), ಗವಾಯಿಗಳಾದ ಶಿವರುದ್ರಯ್ಯ ಗೌಡಗಾಂವ, ತಬಲಾವಾದಕ ಶಾಂತಕುಮಾರ ಜೇರಟಗಿ, ಶಿವಯ್ಯ ಹಿರೇಮಠ, ಶಿವಲಿಂಗ ಬಗಲಿ, ಅಣವೀರ ಸುತಾರ, ಚನ್ನಪ್ಪ ಗಂಗನಳ್ಳಿ, ಲಕ್ಷ್ಮೀಪುತ್ರ ಬಗಲಿ ಹಾಗೂ ಗ್ರಾಮಸ್ಥರು ಇದ್ದರು