ಸಿಂದಗಿ: ಮೂಲತಃ ಮಲಘಾಣ ಗ್ರಾಮದವನಾದ ಮಹಿಬೂಬ್ ತಂ. ಮಕ್ತುಮಸಾಬ ವಾಲೀಕಾರ ತನ್ನ ಮಡದಿ ಹಾಗೂ ಮಕ್ಕಳ ಬಳಿ ತೆರಳಲು ಗಬಸಾವಳಗಿ ಗ್ರಾಮಕ್ಕೆ ತೆರಳುವಾಗ ಘಟನೆ ನಡೆದಿದೆ ಎಂದು ತಿಳಿದಿದೆ.
ರಾಷ್ಟ್ರೀಯ ಹೆದ್ದಾರಿ 50 ರ ವಿಜಯಪುರ ಕಲಬುರ್ಗಿ ರಸ್ತೆಯ ಲೋಯಲಾ ಸ್ಕೊಲ್ ದಾಟಿದ ಕರ್ವಿಂಗ್ ನಲ್ಲಿರುವ ರೋಡಿನ ಪಕ್ಕದಲ್ಲಿರುವ ಸಿಗ್ನಲ್ ಕಂಬಕ್ಕೆ ದ್ವೀಚಕ್ರ ವಾಹನದ ಚಾಲಕ ಮಹಿಬೂಬ್ ತಂ. ಮಕ್ತುಮಸಾಬ ವಾಲೀಕಾರ ವಯಾ:32 ಇವನು ಡಿಕ್ಕಿ ಹೋಡೆದ ಪರಿಣಾಮ ಸ್ಥಳದಲ್ಲೇ ಮೃತ್ತಪಟ್ಟಿದ್ದಾನೆ.
ಅವನ ಎರಡು ಮಕ್ಕಳ ಹಾಗೂ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತ್ತಪಟ್ಟ ವ್ಯಕ್ತಿಗೆ ಮಾತು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಸಿಂದಗಿ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಮುಂದಿನ ಕಾನೂನು ಪ್ರಕ್ರೀಯೆಗಳು ನಡೆಸುತ್ತಿದ್ದಾರೆ.
