ವಾಲೈಂಟೇನ್ ಡೇ ದಿನ ನಾಲ್ಕು ಗೋಡೆ ಮದ್ಯೆ ತಾಳಿ ಕಟ್ಟಿದ. ತಾಳಿ ಹಾಕಿಕೊಂಡರೆ ಸ್ವಲ್ಪದಿನದ ನಂತರ ಹಾಕಿಕೋಳ್ಳುವಂತೆ ಇಗ ಬೇಡಾ ಎಂದು ಹೇಳಿ ನಂಬಿಸಿ ಮೋಸ ಮಾಡುತ್ತಿದ್ದಾನೆ ಎಂದು ಭಾದಿತ ಮಹಿಳೆಯ ರೋದನೆ.
ಸಿಂದಗಿ : ಖಾಸಗಿ ಸ್ಥಳದಲ್ಲಿ ವೇಗದೂತ ಜನದನಿಗೆ ಪ್ರತಿಕ್ರೀಯೆ ನೀಡಿದ ಸಂತ್ರಸ್ತ ಮಹಿಳೆ ಮನ್ನಾಪುರದ ಭಗವಂತ್ರಾಯ ಬಿರಾದಾರ ನಾಲ್ಕು ವರ್ಷದಿಂದ ನನ್ನೊಂದಿಗೆ ಪ್ರೀತಿ ಮಾಡಿ ಇಗಾ ಅವರ ಕುಟುಂಬದವರ ಮಾತಿನ ಮೇರೆಗೆ ಬೇರೆ ಮದುವೆ ಆಗಲು ಹೋರಟಿರುವುದು ತಿಳಿದು ಬಂದಿದೆ.
ಈ ವಿಷಯವಾಗಿ ನ್ಯಾಯಾಲಯದ ಮೋರೆಯು ಹೋಗಿದ್ದು ರಾಜ್ಯದ ಹಲವು ಪತ್ರಿಕೆಗಳಲ್ಲಿಯು ಸುದ್ಧಿ ಪ್ರಕಟಗೊಂಡಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಖಿ- ಒನ್ ಸ್ಟಾಪ್ ಸೆಂಟರ್ ನಿಂದ ತುಮಕುರು ವರಿಷ್ಠಾಧಿಕಾರಿಗಳಿಗೆ ಪ್ರಕರಣದ ಕುರಿತಾಗಿ ಭಗವಂತ್ರಾಯ ಹಾಗೂ ಅವರ ಕುಟುಂಬಸ್ಥರಾದ ಭಾಗಮ್ಮ, ಶ್ರೀಕಾಂತ ಬಿರಾದಾರ, ಹಾಗೂ ರಾಜು ಇವರಿಗೆ ವಿಚಾರಣೆಗೆ ಕರೆಸುವಂತೆ 25 ಏಪ್ರೀಲ್ 2025 ರಂದು ತಿಳಿಸಲಾಗುತ್ತದೆ. ಆದರೂ ಕೌನ್ಸಲಿಂಗ್ ಗೆ ಬರುವುದಿಲ್ಲ. ತಪ್ಪು ಮಾಡದೆ ಇದ್ದರೆ ಬರಬೇಕಿತ್ತು ಬರದೆ ಇರುವುದಕ್ಕೆ ಕಾರಣ ಏನು ನನ್ನಗೆ ನ್ಯಾಯ ಬೇಕು ಅಂತಾಃ ನಾನು ಬಂದಿಲ್ಲವಾ ಎಂದು ಸಂತ್ರಸ್ತೆ ಪ್ರಶ್ನೀಸಿದಳು.

ಜನೇವರಿಲ್ಲಿ ನಿಶ್ಚಿಥಾರ್ತ ಆಗಿದೆ ಎಂದು ನನ್ನಗೆ ಏಪ್ರೀಲ್ ನಲ್ಲಿ ಗೋತ್ತಾದಾಗ ಕೇಳಿದಕ್ಕೆ ತಮ್ಮನ ನಿಶ್ಚಿಥಾರ್ತ ಎಂದು ಹೇಳುತ್ತಾನೆ. ಮೇ ಒಂಬತ್ತರಂದು ಮದುವೆ ಪೀಕ್ಸ್ ಮಾಡಿಕೊಂಡ ಕುಟುಂಬಸ್ಥರಿಗಾಗಿ ಎಲ್ಲ ಮದುವೆ ಚೌಟ್ರಿ ( ಮಂಟಪ) ಹುಡುಕಾಡುತ್ತೆವೆ ಒಂದು ಮಂಟಪದಲ್ಲಿ ಅವರದ್ದು ಹಾಗೂ ಅವರ ತಮ್ಮನದು ಮದುವೆ ನಡೆಯುತ್ತಿರುತ್ತೆ. ಮದುವೆಲ್ಲಿ ನನ್ನನು ನೋಡಿದ ಅವರು ಹಾಗೂ ಕುಟುಂಬದವರು ಎಸ್ಕೇಪ್ ಆಗಿದ್ದಾರೆ. ಮದುವೆಯು ಮುರಿದು ಬಿದ್ದಿದೆ.
ಮಾತುಕತೆಗೆ ಕರೆದ ಹಿರಿಯರಿಂದ ದುಡ್ಡಿನ ಅಮಿಷ?
ನನ್ನೊಂದಿಗೆ ಮಾತನಾಡಲು ಬಂದ ಭಗವಂತ್ರಾಯ ಬಿರಾದಾರ ಪರ ಇರುವ ಹಿರಿಯರು ಬಂದು ಇದನ್ನು ಇಷ್ಟಕ್ಕೆ ನಿಲ್ಲಿಸು 20 ಲಕ್ಷ ಹಣ ಕೋಡುವುದಾಗಿ ಆಮಿಷ ಒಡ್ಡುತ್ತಾರೆ. ಅವರ ಜಾತಿ ವಿಚಾರ ಬಂದಾಗ 20 ಲಕ್ಷಕ್ಕೆ ಆಮಿಷ ನೀಡುವ ಅವರು ಕೆಳ ಜಾತಿಯಲ್ಲಿ ಹುಟ್ಟಿರುವವರು ದುಡ್ಡಿಗೆ ನೀಲ್ಲುತ್ತಿವಾ ಅವರದೆ ಹೆಣ್ಣು ಮಕ್ಕಳಿಗೆ 20 ಲಕ್ಷ ನೀಡಿದರೆ ತಾಳಿ ತಂದು ಕೋಡುತ್ತಾರಾ ಎಂದು ಬೇಸರ ವ್ಯಕ್ತ ಪಡಿಸಿದಳು. ನಮ್ಮ ಜಾತಿಗೂ (ಗಾಣಿಗ) ನಿಮ್ಮ ಜಾತಿಗೂ (ಎಸ್.ಸಿ) ಆಗುವುದಿಲ್ಲ ನಿನ್ನನು ಮನೆ ಒಳಗೆ ಸೇರಿಸಲಾಗದು ಎಂಬ ಜಾತಿ ನಿಂದನೆ ಸಹಜವಾಗಿದೆ. ನನ್ನೊಂದಿಗೆ ಸಂಪರ್ಕಿಸುವಾಗ ಇಲ್ಲದ ಜಾತಿ ಇಗ್ಯಾಕೆ ಬಂತು ಅನ್ನೋದು ತಿಳಿಯುತ್ತಿಲ್ಲ. ನನ್ನ ಅವರ ನಡುವೆ ನಡೆದ ಎಲ್ಲವೂ ಒಂದು ಹೇಣ್ಣಾಗಿ ಹೇಳುವುದು ಕಷ್ಟವೆಂದು ಭಾವುಕಳಾದಳು. ನಾನು ನನ್ನ ಕುಟುಂಬವು ತೊರೆದು ಬಂದಿರುವೆ ನನ್ನಗೆ ನನ್ನ ಗಂಡ ಬೇಕು ನನ್ನಗೆ ನ್ಯಾಯ ವದಗಬೇಕು ಅಷ್ಟೇ ಎಂದು ಹೇಳಿದಳು.

ಸಂತ್ರಸ್ಥೆಯೊಂದಿಗೆ ಆಗಮಿಸಿದ ರಾಷ್ಟ್ರೀಯ ಅಪರಾಧ ತಡೆ ಹಾಗೂ ಮಾನವ ಹಕ್ಕುಗಳ ಪರಿಷತ್ತ ರಾಜ್ಯಾಧ್ಯಕ್ಷೆ ಭಾಗ್ಯಮ್ಮ ಇವರು ಮಾತನಾಡಿ ಇಬ್ಬರು ಪೊಲೀಸ ಅಧಿಕಾರಿಗಳು ಕಾನೂನು ಪರಿಪಾಲಕರು ಅದರಲ್ಲಿ ಸಂತ್ರಸ್ತೆ ನನ್ನಗೆ ನ್ಯಾಯ ಕೋಡಿಸಿ ಇಲ್ಲವೆ ನಾನು ಸತ್ತು ಹೋಗುತ್ತೇನೆ ಎಂದು ಹೇಳುತ್ತಾಳೆ. ಅವಳ ಕಥೆ ಕೇಳಿ ಬೇಜಾರಾಗಿದೆ. ಪೊಲೀಸ ಅಧಿಕಾರಿಯಾದ ಭಗವಂತ್ರಾಯ ಸಾಕ್ಷೀ ನಾಶ ಮಾಡುತ್ತಾ ಬಂದಿದ್ದಾನೆ. ಅವನೂ ಕಾನೂನು ಪ್ರಕಾರ ನೋಟಿಸ ನೀಡಿದರು ಬಂದಿಲ್ಲ ಅವನ್ನ ಮೇಲೆ ಕಾನೂನು ಕ್ರಮ ಯಾಕೆ ಜರಿಗಸಲಾಗುತ್ತಿಲ್ಲ ಎಂಬುದು ಯಕ್ಷ ಪ್ರಶ್ನೇ ಆಗಿದೆ. ಒಂದು ಹೇಣ್ಣಿಗೆ ಬೆಲೆ ಕಟ್ಟುವವರು ಇರುವಾಗ ನಾವು ಎಲ್ಲಿಗೆ ಹೋಗಬೇಕು ನ್ಯಾಯ ಕೇಳಲ್ಲು ಬಂದ ಹೇಣ್ಣು ಮಗಳ ಮೇಲೆಯೆ ಅಪಪ್ರಚಾರಕ್ಕೆ ಗುರಿ ಮಾಡಲಾಗುತ್ತಿದೆ. ಹೇಣ್ಣಿಗೆ ಪೂಜ್ಯನಿಯ ಸ್ಥಾನ ನೀಡಲಾಗುತ್ತದೆ ಅದು ಬೇಡ ಅವಳಿಗೆ ಬದುಕಲು ಬೀಡಿ ಎಂದು ಆಕ್ರೋಶಗೊಂಡರು.
VIDEO LINK :
https://youtu.be/UfIXl6cVjEY?si=eYRTirZZdFvq4P57
https://www.facebook.com/share/v/19DBFYrwiq/
