ಬಂದಾಳ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಶ್ರೀ ಮರಗಮ್ಮ ದೇವಿ ಗಜಾನನ ಮಂಡಳಿಯ kk ಗಣೇಶ ವಿಸರ್ಜನೆ ಸಂಭ್ರಮದಲ್ಲಿ ಭಯಬಿಳಿಸುವ ಉದ್ದೇಶದಿಂದ ನಡೀತಾ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ.
ಸಿಂದಗಿ : ತಾಲ್ಲೂಕಿನ ಬಂದಾಳ ಗ್ರಾಮದಲ್ಲಿ ನಡೆದ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದಂತೆ ಸಿಂದಗಿ ಪೊಲೀಸ್ ಠಾಣೆಯ ( SB ) ಕಾರ್ಯನಿರ್ವಹಿಸುವ ಸಿಬ್ಬಂದಿ ಪರಶುರಾಮ ಕೆಂಚಪ್ಪ ಗೊರವಗುಂಡಗಿ ಎಸ್ ಬಿ ಮಾಹಿತಿಗಾಗಿ ಬಂದಾಗ ಗ್ರಾಮಕ್ಕೆ ಹೋಗಿದ್ದಾಗ ದಿನಾಂಕ 14 ಸೆಪ್ಟೆಂಬರ್ 2024 ರಂದು ರಾತ್ರಿ 9 ಗಂಟೆ ಸುಮಾರಿಗೆ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಜನರಿಗೆ ಭಯ ಬಿಳಿಸುವ ಉದ್ದೇಶದಿಂದ ಪರವಾನಗಿ ಹೊಂದಿದ ಪಿಸ್ತೂಲದಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ಮಾಜಿ ಶಾಸಕ ರಮೇಶ ಭೂಸನೂರ ಅವರು ಗನ್ ಮ್ಯಾನ್ ಆದ ಪ್ರಶಾಂತ ಬಿರಾದಾರ ಹಾಗೂ ಪ್ರಶಾಂತನ ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ಮುದಕಪ್ಪ ಮಾದರ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಸರ್ಕಾರದ ಪರವಾಗಿ ದೂರು ದಾಖಲಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ಕೆಳಗಿದೆ.
ಸಂಭ್ರಮದಲ್ಲಿ ಹಾಗೂ ವಿಧಿವಶರಾಗಿದ್ದ ಸಮಯದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವುದು ಹಳ್ಳಿಗಳಲ್ಲಿ ರೂಢಿಯಲ್ಲಿತ್ತು. ಇಂದಿನ ಕಾಲಘಟ್ಟದಲ್ಲಿ ಬಿಗಿಯಾದ ಕಾನುನು ವ್ಯವಸ್ಥೆಯಲ್ಲಿ ಇಂತಹ ಪ್ರಕರಣಗಳಿಂದ ಕಾನೂನು ಅರಿವು ಮೂಡಿಸು ವಂತಹದಾಗಿದೆ.
