16
ಸಿಂದಗಿ: ಪಟ್ಟಣದ ವಿರಕ್ತಮಠದ ಲಿ.ಸಿದ್ದಲಿಂಗ ಮಹಾಸ್ವಾಮಿಗಳ 3ನೇ ಪುಣ್ಯ ಸ್ಮರಣೆ ಅಂಗವಾಗಿ ಅವರ ಕರ್ತೃ ಗದ್ದುಗೆಗೆ ಮಹಾ ಅಭಿಷೇಕ ಪೂಜಾ ಕಾರ್ಯಕ್ರಮವನ್ನು ಮಾಡಲಾಯಿತು.

ಮಹಾ ಅಭಿಷೇಕ ನೇರವರಿಸಿ ಮಾತನಾಡಿದ ಗುರುರಾಜ ಮಠ ಶ್ರೀಗಳು ಮಠವನ್ನಷ್ಟೇ ಅಗಲಿಲ್ಲ ಇಡೀ ಸಿಂದಗಿ ಜನರನ್ನು ಅಗಲಿದ್ದಾರೆ. ದೈಹಿಕವಾಗಿ ಅವರು ನಮ್ಮ ಜತೆ ಇಲ್ಲವಾದರೂ ಮಾನಸಿಕವಾಗಿ ನಮ್ಮೊಡನೆ ಇದ್ದಾರೆ. ಶ್ರೀಗಳು ಹಾಕಿ ಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರಿಗೆ ಅವರ ತಾಯತ ಪ್ರಸಾದದ ಪವಾಡ ಗೊತ್ತಿತ್ತು ಎಂದು ಹೇಳಿದರು.