ಕುಸಿದ ಮೇಲ್ಛಾವಣಿಯಿಂದ ಕುಟುಂಬ ಕಂಗಾಲು ಆಶ್ರಯಕ್ಕಾಗಿ ಪರದಾಡುತ್ತಿರುವ ಕುಟುಂಬದ ಸದಸ್ಯರು ನೇರವಾಗುವವರಾರು
ಸಿಂದಗಿ : ಕಳೆದ ಒಂದು ವಾರದಿಂದ ಪಟ್ಟಣ ಮತ್ತು ಸುತ್ತಮುತ್ತ ಬಿಟ್ಟು ಬಿಡದೆ ಬರುತ್ತಿರುವ ಮಳೆ ಗುರುವಾರವೂ ಮುಂದುವರಿದಿದೆ. ಮಳೆಯ ಜೊತೆಯಲ್ಲಿ ಥಂಡಿ ಗಾಳಿ ಕೂಡ ಬೀಸುತ್ತಿದೆ. ತಾಲೂಕಿನ ಮದರಿ ಗ್ರಾಮದ ಸಿದ್ದಪ್ಪ ಗುರಪ್ಪ ಸುತಾರ ಅವರ ಮನೆಯ ಮೇಲಿನ ಗೋಡೆ ಮಳೆಯಿಂದಾಗಿ ಬಿದ್ದುಹೋಗಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಸಿದ್ದಪ್ಪ ಸುತಾರ ಅವರ ಮನೆಯಲ್ಲಿ ಒಟ್ಟು ಆರು ಜನರು ವಾಸವಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿಯಲ್ಲಿ ಘಟನೆ ನಡೆದಿದ್ದು, ಅವರು ಮನೆಯ ಹೊರ ಭಾಗದಲ್ಲಿರುವ ಜಾಗದಲ್ಲಿ ಮಲಗಿದ್ದರಿಂದ ಯಾವುದೇ ಅಪಾಯವಾಗಿಲ್ಲ.
ಇದರಿಂದ ಮಳೆಯ ನೀರೆಲ್ಲ ಒಂದೇ ಕಡೆ ನಿಲ್ಲುವುದರಿಂದ ಮನೆಯ ಗೋಡೆ ನೀರಿನಿಂದಾಗಿ ಕುಸಿಯಲು ಕಾರಣವಾಗಿದೆ. ಈ ಸಂಬಂಧ ಸಿದ್ದಪ್ಪ ಅವರ ಮಗ ಸದಾನಂದ ಅವರು ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ ಮಾಹಿತಿ ನೀಡಿದ್ದು, ಸರಕಾರದ ವತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆ ಅಧಿಕಾರಗಳಿಗೆ ಮತ್ತು ಶಾಸಕರಿಗೆ ಮನವಿ ಮಾಡಿದ್ದಾರೆ.
