ಕಾನೂನು ಪಾಲಿಸುವಂತೆ ಪೊಲೀಸ ಅಧಿಕಾರಿಗಳ ಸೂಚನೆ
ಸಿಂದಗಿ: ಸಭೆ ಕುರಿತು ಮಾತನಾಡಿದ ಪಿ.ಎಸ್.ಆಯ್ ಭೀಮಪ್ಪ ರಬಕವಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನೀಲದಂತೆ ಎಚ್ಚರಿಕೆ ವಹಿಸಿ, ಮೊಬೈಲ್ ಬಳಕೆಯೊಂದಿಗೆ ವಾಹನ ಚಲಿಸಬೇಡಿ, ಸಮವಸ್ತ್ರ ಕಡ್ಡಾಯವಾಗಿ ಬಳಸಿ, ಕಾನೂನು ನಿಯಮಗಳು ದಿಕ್ಕರಿಸಿದರೆ ಸರಿಯಾದುದಲ್ಲ. ಕಾನೂನಾತ್ಮಕವಾಗಿ ನೀವು ಸಹಕರಿಸಿದರೆ ನಿಮ್ಮೊಂದಿಗೆ ನಾವು ಸದಾಕಾಲ ಇರುತ್ತೆವೆ ಎಂದು ತಿಳಿಸಿದರು.

ನಿಮ್ಮ ಸೇವೆಗಾಗಿ ಬರುವ ಗ್ರಾಹಕರನ್ನು ಉತ್ತಮ ಬಾಂದವ್ಯದಿಂದ ಕಾಣಿ, ಮಹಿಳೆಯರು ಹಾಗೂ ಕಾಲೇಜು ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಸಿ.ಪಿ.ಆಯ್ ಡಿ.ಹುಲುಗಪ್ಪ ತಿಳಿಸಿದರು.
ಅಟೋ ಚಾಲಕರ ಸಮಸ್ಯೆಗಳ ಬಗ್ಗೆ ತಿಳಿಸಿದ ಚಾಲಕರು ದ್ವಿಚಕ್ರ ವಾಹನಗಳ ಬೇಕಾಬಿಟ್ಟಿ ಒಡಾಡುತ್ತಿದ್ದು, ತುಂಬಾ ತೊಂದರೆ ಉಂಟು ಮಾಡುತ್ತಿವೆ ಅವರಿಗೆ ಕಡಿವಾಣ ಹಾಕಬೇಕು. ಕೆಲವರು ನೂತನವಾಗಿ ಅಟೋ ಚಾಲಕರಾಗಿದ್ದಾರೆ ಅವರಿಗೆ ಲೈಸೆನ್ಸ್ ಕೊರತೆ ಇದೆ ಆದ್ದರಿಂದ ಅವರಿಗೆ ಕೆಲವು ದಿನಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.
ಈ ವೇಳೆ ಪೊಲೀಸ ಸಿಬ್ಬಂದಿಗಳಾದ ಜೆ.ಕೆ.ಕೋರೆ, ಪಿ.ಕೆ.ಗೊರವಗುಂಡಗಿ ಹಾಗೂ ಅಟೋ ಚಾಲಕರಾದ ಚಂದು ಪ್ರಧಾನಿ, ರಫೀಕ್ ಬೇಕಿನಾಳ, ಸೈಪನ್ ಕರ್ಜಗಿ, ಶರಣಪ್ಪ ಬಂಕಲಗಿ, ಮಲ್ಲು ಬಿರಾದಾರ, ಪ್ರಕಾಶ ಮಳ್ಳಿ, ಪ್ರವೀಣ ಹಂಚಿನಾಳ, ರವಿ ಯಂಪೂರೆ ಸೇರಿದಂತೆ ಹಲವು ಅಟೋ ಚಾಲಕರು ಉಪಸ್ಥಿತರಿದ್ದರು.
