
ಬೆಂಗಳೂರು : ಬಿಜೆಪಿ ರಾಜ್ಯಾಅಧ್ಯಕ್ಷ ನಳಿನ್ ಕುಮಾರ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆ ಯಾದ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್
ಪತ್ರಿಕಾ ಮಾದ್ಯಮದವರೊಂದಿಗೆ ಅಭಿಪ್ರಾಯ ಹಂಚಿಕೊಂಡ ಬಾಸ್ಕರ್ ರಾವ್ ೊಂದೇ ಒಂದು ಪಕ್ಷ ಅಖಂಡ ಭಾರತದ ಕನಸು ಹೊತ್ತಿರುವ ಏಕೈಕ ಪಕ್ಷ ಬಿಜೆಪಿ. ಈ ಪಕ್ಷದಿಂದಲೆ ಅದು ಸಾಧ್ಯ, ನಮ್ಮ ದೇಶ ಸಮೃದ್ದ ರಾಷ್ಟ್ರವಾಗಬೇಕು ಪ್ರಪಂಚದಲ್ಲಿ ಗಟ್ಟಿತನದಿಂದ ನಿಲ್ಲಬೇಕು, ಅದಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಾಗೂ ಪಕ್ಷದ ಮುಖಂಡರೊಂದಿಗೆ ನಾವು ನಿಲ್ಲಬೇಕು ಎಂದು ಹೇಳಿದರು. ವಾಲೆಂಟರಿ ರಿಟೈಡಮೆಂಟ್ ತೆಗೆದುಕೊಂಡು ಹೊಸತು ಎನ್ನಾದರು ಮಾಡಬೇಕು ಎಂದುಕೊಂಡು ಎಎಪಿ ಸೇರಿದೆ ಒಂದು ವರ್ಷದಿಂದ ಶ್ರಮ ವಹಿಸಿದರು ಅಲ್ಲಿ ಯಾವುದೇ ಬದಲಾವಣೆಗಳು ಕಾಣಲು ಸಿಗಲಿಲ್ಲ. ಆದರಿಂದ ದೇಶದ ಸೇವೆಗೆ ನಾವು ನಿಲ್ಲಬೇಕಾದ ಕರ್ತವ್ಯ ಅದಕಾರಣದಿಂದ ದೇಶ ಭಕ್ತಿಯ ಏಕೈಕ ಪಕ್ಷವಾದ ಬಿಜೆಪಿ ಸೇರುತ್ತಿದ್ದೆನೆ ಎಂದರು. ಯುವಕರು , ಮಹಿಳೆಯರಿಗೆ ಬಿಜೆಪಿ ಪಕ್ಷ ನೀಡುವ ಪ್ರಾಶಸ್ತ್ಯಗೆ ಪ್ರಭಾವಿತನಾಗಿದೇನೆ ಮುಂದೆ ರಾಜ್ಯದ ನಾಯಕರು ನೀಡುವ ಮಾರ್ಗದರ್ಶನದೊಂದಿಗೆ ಪಕ್ಷಕ್ಕೆ ಕೆಲಸ ಮಾಡುವೆ ನನ್ನನು ಪಕ್ಷಕ್ಕೆ ಬರಮಾಡಿಕೊಂಡ ರಾಜ್ಯಧ್ಯಕ್ಷರಿಗೆವಂದನೆಗಳು ತಿಳಿಸಿದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ ಕಟೀಲ್ ದಕ್ಷ ಪೊಲೀಸ್ ಅಧಿಕಾರಿಯಾದ ಬಾಸ್ಕರ್ ರಾವ್ ನಿವೃತ್ತ ನಂತರ ಎಎಪಿ ಪಕ್ಷ ಸೇರ್ಪಡೆಯಾಗಿ ಒಂದು ವರ್ಷಗಳ ಕಾಲ ರಾಜಕೀಯ ಅನುಭವ ಪಡೆದು ಈ ದೇಶಕ್ಕೆ ನರೇಂದ್ರ ಮೋದಿ ಅವರ ಆಡಳಿತ ಹಾಗೂ ರಾಜ್ಯದ ಬೊಮ್ಮಯಿ ಅವರ ಆಡಳಿತ ಡಬಲ್ ಇಂಜನ್ ಸರಕಾರದಿಂದ ಕಲ್ಯಾಣ ಕರ್ನಾಟಕ ರಾಜ್ಯವೆ ಕಲ್ಯಾಣವಾಗುವುದು ಎಂಬ ಇಚ್ಚೆಯಿಂದ ಇಂದು ಬಾಸ್ಕರ್ ರಾವ್ ಹಾಗೂ ಸಂಗಡಿಗರಿಗೆ ಸ್ವಾಗತ ಬಯಸುವೆ. ದೇಶದಲ್ಲಿ ರಾಜ್ಯದಲ್ಲಿ ಬಿಜೆಪಿ ಪರವಾದ ಅಲ್ಲೆಇದೆ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಬರಬೇಕು ಎಂಬುದು ರಾಜ್ಯದ ಜನರ ಆಸೆ ಇದೆ. ಒಬ್ಬ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಪಕ್ಷಕ್ಕೆ ಆಗಮಿಸಿದ ಬಾಸ್ಕರ್ ರಾವ್ ಅವರಿಗೆ ಶುಭವಾಗಲಿ ಎಂದರು.
ಪಿ.ಎಸ್.ಆಯ್. ಹಗರಣ ದಿಂದ ಆಗಿರುವ ಅನ್ಯಾಯ ಸರಿಪಡಿಸುವ ಅವಕಾಶವಿದೆ, ಯುವಕರ ಭವಿಷ್ಯ ಸರಿಮಾಡಬೇಕು. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್
ವಿಜಯಶಾಸ್ತ್ರೀ ಮಠ, ರಾಜ್ಯ ಸಹ ಕಾರ್ಯದರ್ಶಿ ಎಎಪಿ, ಶರತ್ ಖಾದ್ರಿ, ಶಿವಶರ್ಮಾ, ಆರ್ಯನ್, ಅಂಜನ್ ರಾವ್, ದಿಲೀಪ ಗೌಡ ಬಿಜೆಪಿ ಪಕ್ಷ ಸೇರ್ಪಡೆಯಾದರು.
