ಸಿಂದಗಿ : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ಡಾ.ಡಿ.ಜಿ.ಸಾಗರ ಬಣ ) ದ ಸಿಂದಗಿ ಹಾಗೂ ಆಲಮೇಲ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆಯು ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲದಲ್ಲಿ ಉಸ್ತುವಾರಿ ಜಿಲ್ಲಾ ಸಂಚಾಲಕರು ವಿಜಯಪುರದ ಸಿದ್ದು ರಾಯಣ್ಣನವರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಿಂದಗಿ ತಾಲೂಕಿನ ನೂತನ ಸಂಚಾಲಕರಾಗಿ ಶರಣು ಚಲವಾದಿ ಆಯ್ಕೆ

ಸಂ.ಸಂಚಾಲಕರಾಗಿ ಮಾಡಬಾಳ ಗ್ರಾಮದ ನೀಲಕಂಠ ಹೊಸಮನಿ, ಗಬಸಾವಳಗಿ ಗ್ರಾಮದ ಶಿವಪುತ್ರ ಮೇಲಿನಮನಿ, ಬ್ಯಾಕೋಡ ಗ್ರಾಮದ ಪರಶುರಾಮ ಬ್ಯಾಕೊಡ ಖಜಾಂಚಿಯಾಗಿ ಜೈಬೀಮ ಕೂಚಬಾಳ ಸರ್ವಾನುಮತದಿಂದ ಆಯ್ಕೆಯಾಗಿದಾರೆ.
ತಾಲೂಕಾ ದಲಿತ ವಿದ್ಯಾರ್ಥಿ ಒಕ್ಕೂಟಕ್ಕೆ ಸಂಚಾಲಕರಾಗಿ ಸುನೀಲ ಸುಂಗಠಾಣ ಆಯ್ಕೆಯಾದರೆ, ಸಂ.ಸಂಚಾಲಕರಾಗಿ ಅನಿಲ ಹಚ್ಯಾಳ, ಪ್ರಶಾಂತ ಕೂಚಬಾಳ, ರವಿ.ಹೀಪ್ಪರಗಿ ಹಾಗೂ ಖಜಾಂಚಿಯಾಗಿ ದಯಾನಂದ ದೊಡಮನಿ ಅವರನ್ನು ಸರ್ವಾನುಮತದಿಂದ ಜವಾಬ್ದಾರಿ ನೀಡಲಾಯಿತು.
ನಗರ ಸಂಚಾಲಕರಾಗಿ ಅಜೀತ ಚೌರ

ಸುಧೀರ್.ಕುಮಸಗಿ, ಶಶಿಕುಮಾರ. ಹೀಪ್ಪರಗಿ, ದೇವೇಂದ್ರ. ಚೌರ ಸಂ.ಸಂಚಾಲಕರಾದರೆ ಖಜಾಂಚಿಯಾಗಿ ಪ್ರದೀಪ ಹಜ್ಜೇನವರ . ಗೋಲಗೇರಿ ವಲಯ ಸಂಚಾಲಕರಾಗಿ.ರಾಜು ಖಾನಾಪುರ,
ಸಿಂದಗಿ ವಲಯಕ್ಕೆ. ರವಿ ಹೊಸಮನಿ (ಬೋರಗಿ) ವಲಯ ಸಂಚಾಲಕರಾಗಿ ಆಯ್ಕೆಯಾದರು.
ನೂತನ ಆಲಮೇಲ ತಾಲೂಕಿನ ಸಂಚಾಲಕರಾಗಿ ಬೌದ್ಧ ಉಪಾಸಕ ಜೈಬೀಮ ನಾಯ್ಕೋಡಿ

ಹಾಗೂ ವಿದ್ಯಾರ್ಥಿ ಒಕ್ಕೂಟಕ್ಕೆ ಮುತ್ತು ಮೇಲಿನಮನಿ

ಸರ್ವಾನುಮತದಿಂದ ಆಯ್ಕೆಮಾಡಿ ಗೌರವಿಸಲಾಯಿತು.ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆಯಲ್ಲಿ ದಲಿತ ಸಂಘರ್ಷ ಸಮಿತಿಯ ವಾಯ್.ಸಿ. ಮಯೂರ ನೇತೃತ್ವ ವಹಿಸಿ ಮಾತನಾಡಿದರು ಹಲವಾರು ಸಂಘಟಕರು ಸಭೆಯಲ್ಲಿ ಭಾಗಿಯಾಗಿದ್ದರು.
