Home Uncategorized ಶಿಕ್ಷಕರು ವೇಷಧಾರಿಗಳಾಗಬಾರದು ಸಜ್ಜನರಾಗಬೇಕು : ಡಾ.ಶಂಭು ಬಳಿಗಾರ

ಶಿಕ್ಷಕರು ವೇಷಧಾರಿಗಳಾಗಬಾರದು ಸಜ್ಜನರಾಗಬೇಕು : ಡಾ.ಶಂಭು ಬಳಿಗಾರ

by vegadhut@gmail.com.
0 comments

 

ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಹಾಗೂ ಶಿಕ್ಷಕರ ದಿನೋತ್ಸವ ಸಮಿತಿ, ಸಿಂದಗಿ ವತಿಯಿಂದ  ಶಿಕ್ಷಕರ ದಿನೋತ್ಸವ ಕಾರ್ಯಕ್ರಮ ಹಮ್ಮಿಕೋಳಲಾಗಿತ್ತು. ಕಾರ್ಯಕ್ರಮವು ಶಿಕ್ಷಕಿ ಜಿ.ವ್ಹಿ.ಅಳ್ಳಗಿ ಇವರು ಪ್ರಾರ್ಥನೆ ಗೀತೆ ಹಾಗೂ ನಾಡಗೀತೆ ಹಾಡಿದರೆ ರೈತ ಗೀತೆಯನ್ನು ಶಿಕ್ಷಕ ಜಗದೀಶ ಶಿಂಗೆ ಹಾಡುವುದರ ಮುಖಾಂತಾರ ಕಾರ್ಯಕ್ರಮ ಪ್ರಾರಂಭಿಸಿದರು.

ರಾಷ್ಟ್ರದ ಶೈಕ್ಷಣಿಕ ಅಭಿವೃದ್ಧಿ ನೋಡಿ ಇಂದು ದೇಶವನ್ನು ಅಳೆಯುವ ಕಾಲ ಇದಾಗಿದೆ,   ಮಾನವ ಸಂಪನ್ಮೂಲವನ್ನು ಅಭೀವೃದ್ಧಿಪಡಿಸುವ ಕೆಲಸ ಶಿಕ್ಷಕರು ಮಾಡುತ್ತಿದ್ದಾರೆ ಕಾರ್ಯಕ್ರಮಕ್ಕೆ ಒಟ್ಟಾಗಿ ಕೆಲಸ ನಿರ್ವಹಿಸಿದ್ದು ಸಂತಸ  ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಹರನಾಳ ಇವರು ಪ್ರಾಸ್ತಾವಿಕ ನುಡಿಯನ್ನಾಡಿದರು.

banner

ಶಾಸಕ ರಮೇಶ ಭೂಸನೂರ ಮಾತನಾಡುತ್ತಿರುವುದು.

ಸರ್ವಪಲಿ ರಾಧಾಕೃಷ್ಣರು  ನವರು ಶಿಕ್ಷಕರಾಗಿದ್ದವರು ಭಾರತದ  ರಾಷ್ಟ್ರಪತಿ ಯಾದವರು.  ತಮ್ಮ ಹುಟ್ಟುಹಬ್ಬವನ್ನು ಶಿಕ್ಷಕ ದಿನವನ್ನಾಗಿ ಆಚರಿಸಿವ ಮಹತ್ವಾಕಾಂಕ್ಷೆಯೆ ಉದ್ದೇಶವೆ ಅವರ ಗುರುವಿಗೆ  ಗೌರವ ಸೂಚಿಸುವುದಾಗಿತ್ತು.  ನಾನು  ಇಂದು ಇಲಿದ್ದೆನೆ ಎಂದರೆ ಅದಕ್ಕು  ನನ್ನಗೆ ಪ್ರೋತ್ಸಾಹಿಸಿದ ಗುರುವೃಂದವೆ   ಕಾರಣ. ಶಿಕ್ಷಕರು ಈ ದಿನವನ್ನು ಆತ್ಮ ಸಂಶೋದನೆ  ದಿನವನ್ನಾಗಿ ಪರಿರ್ವತೆನೆ ಮಾಡಿಕೋಳಬೇಕಾಗಿದೆ.  ಶೀಕ್ಷಣಕ್ಕಾಗಿ ಮತಕ್ಷೇತ್ರದಲ್ಲಿ ಹಲವಾರು ಕಾಮಗಾರಿಗಳು ಕೈಗೊಂಡಿದ್ದೆನೆ. ವಿಭೂತಿಹಳ್ಳಯ ಕಿತ್ತೂರು ರಾಣಿ ಚನ್ನಮ್ಮ  ಮೂರಾರ್ಜಿ ಶಾಲೆ, ಗುಬ್ಬೇವಾಡ ಮತ್ತು ಬಂಥನಾಳ ಗಳಲ್ಲಿನ ಶಾಲೆಗಳು ಹಾಗೂ ಸಿಂದಗಿ ನಗರದಲ್ಲಿರುವ ಹಿಂದುಳಿದ ವರ್ಗಗಳ ವಸತಿ ನಿಲಯ ಎಸ್.ಸಿ.ಎಸ್.ಟಿ ಹಾಸ್ಟೇಲ್, ಅಲ್ಪ ಸಂಖ್ಯಾತರ ಹಾಸ್ಟೇಲ್ ಹಲವಾರು ಕೆಲಸಗಳು ಮಾಡಿದ್ದೆನೆ.  ಶಿಕ್ಷಕರಿಗೆ ಇಗ ಬೇಕಾಗಿರುವುದು ಮುಖ್ಯವಾಗಿ “ಗುರು ಭವನ”   ಐವತ್ತು ಲಕ್ಷರೂ ಗಳಲ್ಲಿ ಮುಂದಿನ ಎರಡು ತಿಂಗಳಲ್ಲಿ ಭೂಮಿಪೂಜೆ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ  ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ್ಷೇತ್ರದ ಶಾಸಕರಾದ ರಮೇಶ ಭೂಸನೂರ ಮಾತನಾಡಿದರು.

ಎಸ್.ಬಿ ಚೌದರಿ ಶಿಕ್ಷಕರು  ಜಾನಪದ ವಿದ್ವಾಂಸರು ವಿಶ್ರಾಂತ ಪ್ರಾಚಾರ್ಯರು ಆದ  ಡಾ.ಶಂಭು ಬಳಿಗಾರ ಅವರ ಕಿರು ಪರಿಚಯ ಮಾಡುವುದರ ಮುಖಾಂತರ ಅವರನ್ನು ಉಪನ್ಯಾಸ ನೀಡಲು ಸ್ವಾಗತಿಸಿದರು.

 

ಡಾ.ಶಂಭು ಬಳಿಗಾರ ಅತಿಥಿ ಉಪನ್ಯಾಸ ನೀಡುತ್ತಿರುವುದು.

ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಶಂಭು ಬಳಿಗಾರ ಇವರು  ಮಾತನಾಡಿ ಬೇರೆ ಯಾವುದೆ ವೃತ್ತಿಗಿಂತ ಶಿಕ್ಷಕ ವೃತ್ತಿ ಬಹಳ ಪವಿತ್ರವಾದದು , ಸಮಾಜ ಶಿಕ್ಷಕರನ್ನು ನೋಡುವ ದೃಷ್ಟಿಯೇ ಬೇರೆ. ಸಮಾಜ ನಮ್ಮಿಂದ ಹೇಚಿನದು ನೀರಿಕ್ಷಮಾಡಿ   ಗೌರವದಿಂದ ಕಾಣುತ್ತಾರೆ ಅವರ ನಿರೀಕ್ಷೆ ಸುಳ್ಳಾಗಿಸಬಾರದು.  ವಿದ್ಯಾರ್ಥಿಗಳು ನಿಮ್ಮನು ಅನುಕರಣೆ ಮಾಡುತ್ತಾರೆ.  ಒಳ್ಳೆಯ ವಿದ್ಯಾರ್ಥಿಗಳನ್ನು ನಿರ್ಮಾಣ ಮಾಡುವ ಉದ್ದೇಶ ಇಟ್ಟುಕೊಂಡಿದ್ದರೆ ಶಿಕ್ಷಕರು ಒಳ್ಳೆಯವರಾಗಿ ಬಾಳಬೇಕು. ಸಮರ್ಥವಾದ ರಾಷ್ಟ್ರ ನಿರ್ಮಾಣಮಾಡುವ ಸಾಮರ್ಥ್ಯ  ಉಳ್ಳವರು ಶಿಕ್ಷಕರು ಇಂದು ರಾಧಾಕೃಷ್ಣ ದೇಶದ ಪ್ರಧಾನಿ ಮೋದಿ ವೇದಿಕೆ ಮೇಲಿದ್ದ ಶಾಸಕ ಭೂಸನೂರ ಅವರೆ ಇರಲಿ ಆಯ್.ಎ.ಎಸ್., ಕೆ.ಎ.ಎಸ್. ಡಾಕ್ಟರ್, ಇಂಜಿನಿಯರ್ ಯಾರೆ ಇರಲ್ಲಿ  ಇಲ್ಲಿ ಗುರುತಿಕೋಳ್ಳಲು ಒಬ್ಬ ಶಿಕ್ಷಕನೆ ಕಾರಣ ಆ ಅಭಿಮಾನ ನಮ್ಮಗಿರಬೇಕು.

ನಾವು ಸರ್ವಿಸ್ ನಲ್ಲಿ ಇದ್ದರು ಮಾಸ್ತರ   ನಿವೃತ್ತರಾದರು ಮಾಸ್ತರ ಆದರೆ  ಆಯ್.ಎ.ಎಸ್. ಅಧಿಕಾರಿಗಳಾಗಲಿ ಅಥವಾ ರಾಜಕಾರಣಿಗಳಾಗಲಿ ಅಧಿಕಾರ ಇರೋವರೆಗೆ ಮಾತ್ರ ಅವರು ನಿವೃತ್ತ ರಾದರೆ ಅವರನ್ನು ನೋಡುವ ದೃಷ್ಠಿಯೆ ಬೇರೆ. ಸಮಾಜ ಸರಿಯಾದ ದಾರಿಯಲಿ ನಡೆಯಬೇಕಾದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಸಭ್ಯ ಸಮಾಜದ ಪರಿಕಲ್ಪನೆ ಇಟ್ಟುಕೊಂಡು ಭೋಧನೆ ಮಾಡಬೇಕಿದೆ ವ್ಯಕ್ತಗಳನ್ನು ಮೇಚಿಸಲು ಅಲ್ಲಾ, ಯಾರ ಮೇಚಿಗೆಯು ಶಿಕ್ಷಕನಿಗೆ ಬೇಕಿಲ್ಲಾ  ತಮ್ಮ ಆತ್ಮಸಾಕ್ಷಿಯಾಗಿ ಮನ  ಮೇಚ್ಚುವಂತೆ ಕೆಲಸ ಮಾಡಿದರೆ ಸಾಕು.

ಮಕ್ಕಳಿಗೆ ಮನ ಮುಟ್ಟುವಂತೆ ಪಾಠ ಮಾಡಬೇಕು ಆ ರೀತಿ ಪಾಠ ಮಾಡಬೇಕಾದರೆ ಮನೆಯಲ್ಲಿಯೇ ನಾಳಿನ ಪಾಠದ ಬಗ್ಗೆ ಅಭ್ಯಾಸ ಮಾಡಬೇಕು  ಹಾಡುವ ಪ್ರಸಂಗ ಬಂದರೆ ಹಾಡಿಯು ಹೇಳಬೇಕು ಪಾಠಕ್ಕಿಂತ ಹಾಡು ವಿದ್ಯರ್ಥಿಗಳ ಮನಸಿನಲ್ಲಿ ಊಳಿಯುತ್ತದೆ. ಒಂದು ಸ್ತ್ರೀ ಶಿಕ್ಷಕಿಯಾದರೆ ಇಬ್ಬರು ಶಿಕ್ಷಕರಾದಂತೆ  ಸ್ತ್ರೀ ಗೆ ಮನೆ ನಡೆಸುವ ಮಹತ್ತರವಾದ ಅನುಭವ ವಿರುತ್ತದೆ ಆ ಅನುಭವ ಮಕ್ಕಳಿಗೆ ಸಿಗುತ್ತದೆ.    ಕೆಲವು ಶಿಕ್ಷಕರು ಶಾಲೆಯಲ್ಲಿ ಸಂಬಳ ಬರುತ್ತದೆ ಎಂದು ಪಾಠ ಮಾಡುತ್ತಾರೆ ದಯಮಾಡಿ ಶಿಕ್ಷಕರು ವೇಷಧಾರಿಗಳಾಗಬೇಡಿ ಸಜ್ಜನರಾಗಿ ಎಂದು ಮನವಿ ಮಾಡಿದರು.  ಶಿಕ್ಷಕರ ದಿನಾಚರಣೆಯನ್ನು ಹಬ್ಬದಂತೆ ಆಚರಿಸುತ್ತಿರುವುದು ಆ ಕಾರ್ಯಕ್ರಮದಲ್ಲಿ ನಾನು ಬಾಗಿಯಾಗಿರುವುದು ಸಂತಸ ತಂದಿದೆ ಎಂದು ಉಪನ್ಯಾಸ ಭಾಷಣಕ್ಕೆ ವಿರಾಮ ನೀಡಿದರು.

ಪುರಸಭೆ ಉಪಾಧ್ಯಕ್ಷ ಹಾಸೀಂ ಆಳಂದ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ  ಆನಂದ ಭೂಸನೂರ, ಆಯ್.ಎಫ್. ಬಾಲ್ಕಿ, ಎಸ್.ಎಸ್. ಕತ್ನಳ್ಳಿ,  ಎಸ್.ಎಸ್.ಕರಿಗೊಂಡ ವೇದಿಕೆ ಮೇಲಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ ಸ್ವಾಗತಿಸಿದರೆ ರಾಯಪ್ಪ ಇವಣಿಗಿ ಶಿಕ್ಷಕರು ನಿರುಪಿಸಿದರು ಯು.ಆಯ್ ಶೇಕ್  ಗುರುಗಳು ವಂದಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news