ಸಿಂದಗಿ : ನಾಳೆ ನಡೆಯಲಿರುವ ಬೃಹತ್ ಸಮಾವೇಶವು ರಾಜ್ಯ ಬಿಜೆಪಿ ಸರಕಾರ ನೀಡಿದ ಮಾತು ತಪ್ಪಿದ ಸರಕಾರದ ವಿರುದ್ದ ನಡೆಯಲಿದೆ.
ವಿಜಯಪುರದ ದರ್ಬಾರ ಹೈಸ್ಕೂಲ್ ಮೈದಾನದಲ್ಲಿ ಮದ್ಯಾಹ್ನ 3 ಗಂಟೆಗೆ ಜರುಗಲಿದೆ. ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಪಕ್ಷದ ರಾಜ್ಯ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಹಾಗೂ ಪ್ರಚಾರ ಸಮಿತಿಯ ಎಂ.ಬಿ.ಪಾಟೀಲ ಹಾಗೂ ರಾಜ್ಯ ನಾಯಕರು ಮುಖಂಡರು ಪಾಲ್ಗೋಳಲಿದ್ದಾರೆ. ಸುಮಾರು ಐವತ್ತ ರಿಂದ ಅರವತ್ತು ಸಾವಿರ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಿಂದಗಿ ಮತಕ್ಷೇತ್ರದಿಂದ ಒಂದು ಭೂತ್ ಗೆ ಒಂದು ವಾಹನದ ವ್ಯವಸ್ಥೆ ಮಾಡಿಕೋಳ್ಳಲಾಗಿದೆ ಆದ ಕಾರಣ ಕಾಂಗ್ರೇಸ್ ಕಾರ್ಯಕರ್ತರು ಹೇಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮಾಜಿ ಶಾಸಕ, ಪ್ರಚಾರ ಸಮಿತಿ ಸದಸ್ಯ ಶರಣಪ್ಪ ಸುಣಗಾರ ಮನವಿ ಮಾಡಿದ್ದರು.