Home Uncategorized ನಡ್ಡಾ ಆಗಮನಕ್ಕೆ ಕೇಸರಿ ಹೊತ್ತು ನಿಂತ ಸಿಂದಗಿ

ನಡ್ಡಾ ಆಗಮನಕ್ಕೆ ಕೇಸರಿ ಹೊತ್ತು ನಿಂತ ಸಿಂದಗಿ

by vegadhut@gmail.com.
0 comments

ಸಿಂದಗಿ : ವಿಜಯ ಸಂಕಲ್ಪ ಯಾತ್ರೆಗೆ ಸಿದ್ಧತೆಗೊಂಡ ಸಿಂದಗಿ ಮತಕ್ಷೇತ್ರದಿಂದ 2023-ರ ಚುನಾವಣೆಗೆ ಅಧಿಕೃತ ರಣಕಹಳೆ ಬಿಜೆಪಿ ಮೂಡಿಸುತ್ತಿದೆ.

 

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ನಾಳೆ ಬೆಳಿಗ್ಗೆ 10:೦೦ ಗಂಟೆಗೆ ಆಗಮಿಸಲಿದ್ದು ವಿಜಯಪುರದ ಜ್ಞಾನಯೋಗಾಶ್ರಮಕ್ಕೆ ತೆರಳಿ ಲಿಂಗೈಕ್ಯ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಜಿಗಳಿಗೆ ಗೌರವ ನಮನಗಳು ಸಲ್ಲಿಸಿ ಸಿಂದಗಿ ಮತಕ್ಷೇತ್ರಕ್ಕೆ ಆಗಮಿಸುವರು. 

ಸಿಂದಗಿ ಕೇಸರಿಕರಣಗೊಂಡಿದ್ದು ಎಲ್ಲ ಬೀದಿ ದೀಪದ ಕಂಬಗಳಿಗೆ ಬಿಜೆಪಿ ಬಾವುಟ, ಜೆ.ಪಿ.ನಡ್ಡಾ ಆಗಮಿಸುವ ರಸ್ತೆಯಲ್ಲಿ ಕೇಸರಿಯಿಂದ ಶೃಂಗಾರ ಗೋಳಿಸಲಾಗುತ್ತಿದೆ. ಬ್ಯಾನರ್ ಬಂಟಿಂಗ್ ಗಳಿಂದ ಸಿಂದಗಿ ಮತಕ್ಷೇತ್ರ ಸಂಪೂರ್ಣ ಕೇಸರಿ ಮಯವಾಗಿದೆ. 

banner

ಒಟ್ಟು 50,000 ಜನರು ಸೇರುವ ನಿರೀಕ್ಷೆಯಿದೆ  40,000ಆಸನದ ವ್ಯವಸ್ಥೆ ಮಾಡಲಾಗಿದೆ. ಬೂತ್ ಮಟ್ಟದಲ್ಲಿ ಕರಪತ್ರ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆ ಕರಪತ್ರ ನೀಡುವ ಅಭಿಯಾನ ಈಗಾಗಲೆ ಮಾಡಲಾಗಿದೆ ನಾಳಿನ ಕಾರ್ಯಕ್ರಮಕ್ಕೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವರಾದ ಸಿ.ಎನ್. ಅಶ್ವತ್ ನಾರಾಯಣ, ಗೋವಿಂದ ಕಾರಜೋಳ, ಹಾಗೂ ಶಾಸಕರು, ಮಾಜಿ ಶಾಸಕರು ರಾಜ್ಯ ಪದಾಧಿಕಾರಿಗಳು ಆಗಮಿಸುವರೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಿನಯ ಬಿದರಿ ತಿಳಿಸಿದ್ದಾರೆ.

ಪೋಲೀಸ್ ಬಿಗಿ ಭದ್ರತೆ

ಕಾರ್ಯಕ್ರಮಕ್ಕೆ  3 ಡಿ.ವಾಯ್.ಎಸ್.ಪಿ 7ಸಿ.ಪಿ.ಆಯ್, 24 ಪಿ.ಎಸ್‌ಆಯ್, 39ಎ.ಎಸ್.ಆಯ್, 24 ಡಬ್ಲು.ಎಚ್.ಸಿ/ಡಬ್ಲು.ಪಿ.ಸಿ  ಹಾಗೂ 277ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗೆ ಆಗಮಿಸದ್ದಾರೆಂದು ಸಿಂದಗಿ ಪಿ.ಎಸ್.ಆಯ್ ಸೊಮೇಶ ಗೇಜ್ಜಿ ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news